ಗುರುಪುರ: ಬೈಕಿಗೆ ಬಸ್ ಢಿಕ್ಕಿ; ಪೊಲೀಸ್ ಸಿಬ್ಬಂದಿ ಮೃತ್ಯು
Update: 2019-03-19 08:22 GMT
ಮಂಗಳೂರು, ಮಾ.19: ಖಾಸಗಿ ಬಸ್ಸೊಂದು ಬೈಕೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗುರುಪುರದಲ್ಲಿ ನಡೆದಿದೆ.
ಮೃತರನ್ನು ಬೆಳುವಾಯಿ ಶಾಂತಿನಗರ ಬಳಿ ನಿವಾಸಿ ಮಹೇಶ್ ಲಮಾಣಿ(32) ಎಂದು ಗುರುತಿಸಲಾಗಿದೆ. ಇವರು ದ.ಕ. ಜಿಲ್ಲಾ ಪೊಲೀಸ್ ಸಿಬ್ಬಂದಿ.
ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಬಳಿ ಈ ಅಪಘಾತ ಸಂಭವಿಸಿದೆ. ಕಾರ್ಕಳದಿಂದ ಮಂಗಳೂರಿನತ್ತ ಬರುತ್ತಿದ್ದ ವಿಶಾಲ್ ಹೆಸರಿನ ಖಾಸಗಿ ಬಸ್ ಅದೇ ರಸ್ತೆಯಲ್ಲಿ ಬೆಳುವಾಯಿಯಿಂದ ಮಂಗಳೂರಿನತ್ತ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಅತೀ ವೇಗದಲ್ಲಿದ್ದ ಬಸ್ ಮೊದಲು ಪಿಕಪ್ ವಾಹನವೊಂದಕ್ಕೂ ಢಿಕ್ಕಿ ಹೊಡೆದಿದೆ. ಬಳಿಕ ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಮಹೇಶ್ ಲಮಾಣಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.