ಬ್ಯಾಟರಿ ಕಳವು ಪ್ರಕರಣ: ಆರೋಪಿಗಳ ಬಂಧನ

Update: 2019-03-19 16:17 GMT

ಮಂಗಳೂರು, ಮಾ.19: ಕುಲಶೇಖರ ಶಾಲೆಯೊಂದರ ಮುಂಭಾಗದ ರಸ್ತೆಬದಿ ನಿಲ್ಲಿಸಿದ್ದ ಪಿಕ್‌ಅಪ್ ವಾಹನದ ಬ್ಯಾಟರಿ ಕಳವುಗೈದ ಆರೋಪದಲ್ಲಿ ಇಬ್ಬರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪದವು ಶಕ್ತಿನಗರ ನಿವಾಸಿ ರಾಜೇಶ (31), ಬಿಕರ್ನಕಟ್ಟೆ ನಿವಾಸಿ ಪ್ರಕಾಶ (38) ಬಂಧಿತ ಆರೋಪಿಗಳು. ಇವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿಯವರು.

ಪ್ರಕರಣ ವಿವರ: ಬಂಧಿತ ಆರೋಪಿಗಳು ಮಾ.12ರಂದು ರಾತ್ರಿ ವೇಳೆ ಪಿಕ್‌ಅಪ್ ವಾಹನದ ಬ್ಯಾಟರಿ ಕಳವು ಮಾಡಿ, ಪಿಕ್‌ಅಪ್ ವಾಹನದ ಇಂಜಿನ್‌ಗೆ ಉಪ್ಪನ್ನು ಹಾಕಿದ್ದರು. ಸುಮಾರು 12 ಸಾವಿರ ರೂ. ನಷ್ಟ ಉಂಟು ಮಾಡಿದ ಕುರಿತಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳಿಂದ ಕಳವಾದ 7,500 ರೂ. ವೌಲ್ಯದ ಬ್ಯಾಟರಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಗದೀಶ್ ಆರ್., ಪಿಎಸ್ಸೈ ಪ್ರದೀಪ್ ಟಿ.ಆರ್. ಹಾಗೂ ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News