ಮಾ.22: ಉಳಿತೊಟ್ಟು ಅಲ್-ಇಖ್ವಾನ್ ಕಮಿಟಿಯ ದಶಮಾನೋತ್ಸವದ ಸಮಾರೋಪ

Update: 2019-03-21 06:41 GMT

ನೆಲ್ಯಾಡಿ, ಮಾ.21 : ಇಲ್ಲಿಗೆ ಸಮೀಪದ ಉಳಿತೊಟ್ಟು ಬಿಲಾಲ್ ಜುಮಾ ಮಸೀದಿ ಅಧೀನದ ಅಲ್-ಇಖ್ವಾನ್ ಕಮಿಟಿಯ ದಶಮಾನೋತ್ಸವ ಸಮಾರೋಪ ಸಮಾರಂಭ ಮಾ.22ರಂದು ಸಂಜೆ 7 ಗಂಟೆಗೆ ಉಳಿತೊಟ್ಟು ಮಸ್ಜಿದ್ ವಠಾರದಲ್ಲಿ ಮರ್ಹೂಂ ಹಾಜಿ ಯು.ಪುತ್ತುಕುಂಞಿ ವೇದಿಕೆಯಲ್ಲಿ ನಡೆಯಲಿದೆ.

ಅಲ್-ಇಖ್ವಾನ್ ಕಮಿಟಿಯ ಅಧ್ಯಕ್ಷ ರಫೀಕ್ ಉಳಿತೊಟ್ಟು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉಳಿತೊಟ್ಟು ಖತೀಬ್ ಮಜೀದ್ ಅಹ್ಸನಿ ಉದ್ಘಾಟಿಸಲಿದ್ದಾರೆ.

ಅಸ್ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ದುಆಗೆ ನೇತೃತ್ವ ವಹಿಸುವರು.  

ಇದೇ ಸಂದರ್ಭ ಸ್ವಾದಿಕ್ ಅಲಿ ಫಾಳಿಲಿ ಗೂಡಲ್ಲೂರು ಮತ್ತು ತಂಡದ ವತಿಯಿಂದ ಬುರ್ದಾ ಮಜ್ಲಿಸ್ ನಡೆಯಲಿದೆ. ಮಾಸ್ಟರ್ ಶಮ್ಮಾಸ್ ಉಳ್ಳಾಲ, ಶಾಹಿನ್ ಬಾಬು ತಾನೂರು ಕೇರಳ, ನಾಸಿಫ್ ಕ್ಯಾಲಿಕಟ್ ನಅತೇ ಶರೀಫ್ ಗೆ ನೇತೃತ್ವ ನೀಡುವರು. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News