ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಟ್ಟಡದ ಮೇಲೆ ಮರ ಬಿದ್ದು ಅಪಾರ ಹಾನಿ
Update: 2019-03-21 07:18 GMT
ಉಡುಪಿ, ಮಾ.21: ಉಡುಪಿ ಚಂದು ಮೈದಾನದ ಬಳಿ ಇರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್)ಯ ಮುಖ್ಯ ಕಚೇರಿಯ ಕಟ್ಟಡದ ಮೇಲೆ ಮರವೊಂದು ಬಿದ್ದು ಅಪಾರ ಹಾನಿ ಸಂಭವಿಸಿರುವ ಘಟನೆ ಇಂದು ಪೂರ್ವಾಹ್ನ 11.30ರ ಸುಮಾರಿಗೆ ನಡೆದಿದೆ.
ಕಚೇರಿ ಸಮೀಪದ ಖಾಸಗಿ ಜಾಗದಲ್ಲಿರುವ ಹಳೆಯ ಬೃಹತ್ ಮರವೊಂದು ಆಕಸ್ಮಿಕವಾಗಿ ಡಿಎಆರ್ ಆವರಣದಲ್ಲಿರುವ ಕಚೇರಿ ಕಟ್ಟಡ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಸುಮಾರು ನಾಲ್ಕು ಶೌಚಾಲಯ ಹಾಗೂ ಕಟ್ಟಡ ಇತರ ಭಾಗಗಳಿಗೆ ಹಾನಿಯಾಗಿದ್ದು, ಸುಮಾರು ಒಂದು ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಮರದ ಕೆಳಗೆ ನಿಲ್ಲಿಸಿದ ಡಿಎಆರ್ ಸಿಬ್ಬಂದಿಯ ಎರಡು ಬೈಕ್ಗಳಿಗೆ ಹಾನಿಯಾಗಿದೆ. ಅದೇ ರೀತಿ ನಾಲ್ಕೈದು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಎಂದು ಮೂಲಗಳು ತಿಳಿಸಿವೆ.