ಸಾಣೂರು: ದಾಖಲೆ ಇಲ್ಲದ 3 ಲಕ್ಷ ರೂ. ನಗದು ವಶ

Update: 2019-03-21 13:54 GMT

ಕಾರ್ಕಳ, ಮಾ. 21: ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ ಒಟ್ಟು 3 ಲಕ್ಷ ರೂ. ನಗದು ಹಣವನ್ನು ಸ್ಥಾನಿಕ ಜಾಗೃತ ದಳ ಸಾಣೂರು ಚೆಕ್‌ ಪೋಸ್ಟ್‌ನಲ್ಲಿ ಇಂದು ಮಧ್ಯಾಹ್ನ ವಶಪಡಿಸಿಕೊಂಡಿದೆ.

ತಪಾಸಣೆಯ ವೇಳೆ ಮಂಗಳೂರು ಶಕ್ತಿನಗರ ಕುಂಟಲ್ಪಾಡಿಯ ಪ್ರಸನ್ನ ಕಾರಂತ್ ಹಾಗೂ ಶಂಕರ ನಾರಾಯಣ ಕಾರಂತ್ ಎಂಬವರು ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲ 2000 ರೂ. ಮುಖಬೆಲೆಯ 25 ನೋಟುಗಳು ಮತ್ತು 500 ರೂ. ಮುಖಬೆಲೆಯ 500 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಾನಿಕ ಜಾಗೃತ ದಳದ ಮುಖ್ಯಸ್ಥ ನಾರಾಯಣ ನಾಯರ್ ನೇತೃತ್ವದ ಈ ತಂಡದಲ್ಲಿ ಸಿಬ್ಬಂದಿ ಅರಣ್ಯ ರಕ್ಷಕ ವಿನಾಯಕ್ ಯು.ಡಿ., ಕಾರ್ಕಳ ನಗರ ಠಾಣೆಯ ಜಯರಾಜ್, ಅಜೆಕಾರ್ ಠಾಣೆಯ ಸಿದ್ದೇಶ್ ಟಿ.ಆರ್. ಹಾಜರಿದ್ದರು. ಬಳಿಕ ಈ ಹಣವನ್ನು ಕಾರ್ಕಳ ತಹಶೀಲ್ದಾರ್ ಸುಪರ್ದಿಗೆ ಒಪ್ಪಿಸಲಾಗಿದೆ. ತಹಶೀಲ್ದಾರ್ ಈ ಹಣವನ್ನು ಕಾರ್ಕಳ ಉಪಖಜಾನೆಗೆ ವರ್ಗಾಯಿಸಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News