ಮಾ.22: ದೇರಳಕಟ್ಟೆಯಲ್ಲಿ ಉನರ್ತು ಸಂಗಮಂ ಕಾರ್ಯಕ್ರಮ

Update: 2019-03-21 14:09 GMT

ದೇರಳಕಟ್ಟೆ, ಮಾ. 21: 'ಸೂಫಿ ಹಾದಿಯೇ ಇಸ್ಲಾಂ' ಎಂಬ ಶೀರ್ಷಿಕೆಯಡಿಯಲ್ಲಿ ಕೇರಳ ರಾಜಧಾನಿ ತಿರುವನಂತಪುರದಿಂದ ಮಂಗಳೂರು ತನಕ ಉನರ್ತು ಸಂಗಮಂ ಕಾರ್ಯಕ್ರಮವು ನಡೆಯುತ್ತಿದ್ದು, ಮಂಗಳೂರು ಭಾಗದ ಕಾರ್ಯಕ್ರಮವು ಮಾ.22 ಸಂಜೆ 3:00 ಗಂಟೆಗೆ ದೇರಳಕಟ್ಟೆಯ ಬಿಸಿಸಿ ಹಾಲ್ ನಲ್ಲಿ ನಡೆಯಲಿದೆ.

ಸಯ್ಯಿದ್ ಫಝಲ್ ಪೂಕೋಯ ತಂಙಳ್ ದುಆ ಮಾಡಲಿದ್ದು, ಸಂಜೆ 3:00 ಗಂಟೆಗೆ ಸೂಫಿ ಪ್ರಕೀರ್ತನೆ ಆರಂಭಗೊಂಡು, 5:00 ಗಂಟೆಗೆ ತೊಝಿಯೂರ್ ಕುಂಞಿ ಮುಹಮ್ಮದ್ ಸಖಾಫಿ ಹಾಗೂ ಅಬ್ದುಲ್ ಸಮದ್ ಅನ್ವರಿ ಕೀಝಿಶೇರಿ ಪ್ರಭಾಷಣ ಮಾಡಲಿದ್ದು, ಸಂಜೆ 7:00 ಗಂಟೆಗೆ ನೌಶಾದ್ ಅಹ್ಸನಿ ಒದುಕುಂಙಳ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಮುಖ್ಯ ಅಥಿತಿಯಾಗಿ ಸಯ್ಯಿದ್ ನಿಝಾಮುದ್ದೀನ್ ಅಸ್ಸಖಾಫ್ ಮಾನಂದವಾಡಿ, ಸಯ್ಯಿದ್ ನಾಫಿಅ್ ಹೈದ್ರೋಸ್ ತಿರೂರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News