ಬಂಟ್ವಾಳ: ಯುವ ಎಂಜಿನಿಯರ್ ಆನಂದ ಬಂಜನ್‍ಗೆ ಡಾಕ್ಟರೇಟ್

Update: 2019-03-23 11:49 GMT

ಬಂಟ್ವಾಳ, ಮಾ. 23: ಇಲ್ಲಿನ ಕಳ್ಳಿಗೆ ನಿವಾಸಿ, ಬಂಟ್ವಾಳ ತಾಲೂಕು ಇಂಜಿನಿಯರ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಆನಂದ ಬಂಜನ್ ಇವರಿಗೆ ಬೆಂಗಳೂರಿನ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಎಂಡ್ ಎಜುಕೇಶನ್ ಸಂಸ್ಥೆ ವತಿಯಿಂದ ಡಾಕ್ಟರೇಟ್ ಗೌರವ ದೊರೆತಿದೆ.

ಮುಂಬೈನ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ಗೌರವ ಸ್ವೀಕರಿಸಿದರು. ಸಂಸ್ಥೆ ಅಧ್ಯಕ್ಷ ಡಾ.ಡೇನಿಯಲ್ ಎಡ್ವಿನ್, ಡೀನ್ ಡಾ.ಲೆಸ್ಲೆ ಜಾನ್, ಕೇಂದ್ರ ಸಚಿವ ರಾಮದಾಸ್ ಅಠಾವಾಲೆ, ಪೊಲೀಸ್ ಅಧಿಕಾರಿ ಎಂ.ಡಿ.ಕ್ವೆಸಾಯಿರ್ ಖಾಲಿದ್ ಅಹ್ಮದ್ ಮತ್ತಿತರರು ಹಾಜರಿದ್ದರು. 
ಬಂಟ್ವಾಳ ತಾಲೂಕಿನ ಜೋಡುಮಾರ್ಗ ಜ್ಯೂನಿಯರ್ ಚೇಂಬರ್ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಆನಂದ್ ಬಂಜನ್ ಸಾಹಿತ್ಯ ಮತ್ತು ಸಮಾಜಸೇವೆ ಮೂಲಕವೂ ಗುರುತಿಸಿಕೊಂಡಿದ್ದರು. "ಮತ್ತೆ ಹುಟ್ಟಿ ಬಾ ಸರ್ವಜ್ಞ" ಎಂಬ ಕೃತಿಯನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News