ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

Update: 2019-03-23 15:46 GMT

ಕಾರ್ಕಳ, ಮಾ.23: ವೈಯಕ್ತಿಕ ಕಾರಣದಿಂದ ಮನನೊಂದ ಪಳ್ಳಿ ಗ್ರಾಮದ ಮಾಯಬೆಟ್ಟುವಿನ ಮಂಜುನಾಥ ಪೂಜಾರಿ(68) ಎಂಬವರು ಮಾ.22ರಂದು ಬೆಳಗ್ಗೆ ಮನೆಯ ಸಮೀಪ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿರುವ ಶಂಕರ ಮೊಗ ವೀರ ಎಂಬವರ ಅಂಗಡಿ ಕಟ್ಟಡದಲ್ಲಿ ವಾಸವಾಗಿರುವ ಸಂಜೀವ ನಾಯಕ್ (48) ಎಂಬವರು ಮದ್ಯಪಾನದ ಚಟ ಹಾಗೂ ಒಂಟಿತನದಿಂದ ಮನ ನೊಂದು ಮಾ.22ರಂದು ಸಂಜೆ ವೇಳೆ ಕಟ್ಟಡದ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News