ಹತ್ತನೇಮೈಲ್ ಕಲ್ಲು: ನಶಾತುದ್ದೀನ್ ಯಂಗ್ ಫೆಡರೇಶನ್ ವತಿಯಿಂದ ಧಾರ್ಮಿಕ ಕಾರ್ಯಕ್ರಮ

Update: 2019-03-25 17:15 GMT

ಫರಂಗಿಪೇಟೆ, ಮಾ. 25: ನಶಾತುದ್ದೀನ್ ಯಂಗ್ ಫೆಡರೇಶನ್ ಹತ್ತನೇಮೈಲ್ ಕಲ್ಲು ಇದರ 13ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಮತ ಪ್ರವಚನದ ಸಮಾರೋಪ ಸಮಾರಂಭ ರವಿವಾರ ನಡೆಯಿತು.

ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೊಸಿ ತಂಙಳ್ ಕಿಲ್ಲೂರ್ ದುವಾ ನೆರವೇರಿಸಿದರು, ತ್ವಾಹಾ ಜುಮಾ ಮಸೀದಿ ಹತ್ತನೇ ಮೈಲ್ ಕಲ್ಲು ಮುದರಿಸ್ ಜಾಫರ್ ಬುಸ್ತಾನಿ ಕಾಸರಗೋಡ್  ಪ್ರವಚನ ನೀಡಿದರು,

ನಶಾತ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ದಾರುಲ್ ಅಮಾನ್ ಎಲ್ಲೂರು ಉಡುಪಿ ಮುದರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ, ಸಚಿವ ಯು.ಟಿ. ಕಾದರ್, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಜಿಲ್ಲಾ ಪಂ ಮಾಜಿ ಸದಸ್ಯ ಉಮರ್ ಫಾರೂಕ್, ಮಾಜಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಪುದು ಗ್ರಾಪಂ ಸದಸ್ಯ ನಝೀರ್, ಹಾಶಿರ್,  ಹತ್ತನೇ ಮೈಲ್ ಕಲ್ಲು ಮಸೀದಿ ಅಧ್ಯಕ್ಷ ಮೊಹಮ್ಮದ್ ಆಲಿ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಬಾವ, ನೂರುಲ್ ಹುದಾ ಮದರಸ ಕುಂಜತ್ಕಳ ಅಧ್ಯಕ್ಷ ಅಶ್ರಫ್ ಟಿಎಮ್, ಮಾಜಿ ಸದಸ್ಯ ಲತೀಫ್, ಇಸ್ಮಾಯಿಲ್, ಇಮ್ತಿಯಾಝ್ ಉಪಸ್ಥಿತರಿದ್ದರು.

ಇಕ್ಬಾಲ್ ಹತ್ತನೇಮೈಲ್ ಕಲ್ಲು ಸ್ವಾಗತಿಸಿ, ಅಶ್ರಫ್ ಮಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News