ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2019-03-28 09:47 GMT

ಉಡುಪಿ, ಮಾ.28: ಒಂಭತ್ತು ವರ್ಷಗಳ ಹಿಂದೆ ಹಿರಿಯಡ್ಕ ಅಂಜಾರು ಗ್ರಾಮದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ಬ್ರಹ್ಮಾವರ ಬೈಕಾಡಿ ಸಮೀಪದ ಮುತ್ತಪ್ಪ ಯಾನೆ ಸುರೇಶ್ ಬಳೆಗಾರ (36), ಆತನ ತಮ್ಮ ನಾಗರಾಜ ಬಳೆಗಾರ (33), ಮೈಸೂರಿನ ಶೇಖ್ ರಿಯಾಝ್ ಅಹಮದ್ (33), ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶರಣಪ್ಪ ಅಮರಾಪುರ (33) ಶಿಕ್ಷೆಗೊಳಗಾದ ಆರೋಪಿಗಳು.

ಪ್ರಕರಣದ ಆರೋಪಿ ಕುಕ್ಕಿಕಟ್ಟೆ ಇಂದಿರಾ ನಗರದ ರಾಘವೇಂದ್ರ ಯಾನೆ ರಾಘು ಎಂಬಾತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿ ರೌಡಿ ಇಂದಿರಾನಗರದ ಪಿಟ್ಟಿ ನಾಗೇಶ್ ವಿಚಾರಣೆ ಮಧ್ಯಾವಧಿಯಲ್ಲಿ ಕೊಲೆಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News