ಮಿತ್ತರಾಜೆ: ಎಸ್ಸೆಸ್ಸೆಫ್ ವತಿಯಿಂದ ಇರ್ಶಾದಿಯ್ಯಾ ಇಲ್ಫಾ ಕ್ಯಾಂಪ್, ಮಿಹ್ರಾಜ್ ಸಂಗಮ
ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ರಾಜ್ಯಾದ್ಯಂತ ಹಮ್ಮಿಕೊಂಡಿರುವ ಇರ್ಶಾದಿಯ್ಯಾ 'ಇಲ್ಫಾ' ಕ್ಯಾಂಪ್ ಇದರ ಮಿತ್ತರಾಜೆ ಶಾಖೆ ಕಾರ್ಯಕರ್ತರ ಸಮ್ಮಿಲನ ಹಾಗೂ ಮಿಹ್ರಾಜ್ ಮೌಲಿದ್ ಮಂಗಳವಾರ ಪಂಜರಕೋಡಿ ನೂರುಲ್ ಉಲೂಂ ಮದ್ರಸ ಹಾಲ್'ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜರಕೋಡಿ ಜುಮಾ ಮಸೀದಿ ಖತೀಬ್ ಅಬೂಬಕರ್ ಮದನಿ ವಹಿಸಿದ್ದರು. ಮುಅಲ್ಲಿಂ ಶರೀಫ್ ಹನೀಫಿ ಸ್ವಾಗತಿಸಿದರು.
ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷ ಅಕ್ಬರ್ ಮದನಿ ಆಲಂಪಾಡಿ, ಡಿವಿಷನ್ ಕೋಶಾಧಿಕಾರಿ ಅಲೀ ಮದನಿ ತರಗತಿ ನಡೆಸಿಕೊಟ್ಟರು. ಪಂಜರಕೋಡಿ ಜುಮಾ ಮಸೀದಿ ಅಧ್ಯಕ್ಷ ಮಜೀದ್ ಕೆ, ಪ್ರಧಾನ ಕಾರ್ಯದರ್ಶಿ ಉಮ್ಮರ್ ಕೆ, ಎಸ್.ವೈ.ಎಸ್ ಪಂಜರಕೋಡಿ ಬ್ರಾಂಚ್ ಅಧ್ಯಕ್ಷ ಇಬ್ರಾಹಿಂ ಮಿತ್ತರಾಜೆ, ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ, ಕೋಶಾಧಿಕಾರಿ ಹಂಝ ಮಂಚಿ, ಕ್ಯಾಂಪಸ್ ಕಾರ್ಯದರ್ಶಿ ಪರ್ವಾಝ್ ಮಂಚಿ, ಜೊತೆ ಕಾರ್ಯದರ್ಶಿ ಲುಖ್ ಮಾನ್ ಕುಕ್ಕಾಜೆ ಮತ್ತು ಜಾಬಿರ್ ಮೋಂತಿಮಾರ್, ಝುಬೈರ್ ಸಂಪಿಲ ಹಾಗೂ ಡಿವಿಷನ್, ಸೆಕ್ಟರ್, ಶಾಖಾ, ಎಸ್ ವೈ ಎಸ್ ನೇತಾರರು, ಕಾರ್ಯಕರ್ತರು ಭಾಗವಹಿಸಿದ್ದರು.