ಕಡಬ: ತಲೆಗೆ ಮರಬಿದ್ದು ಗಾಯಾಳು ಮೃತ್ಯು
Update: 2019-04-03 11:28 GMT
ಕಡಬ, ಎ.3: ಮುರಿದು ಬಿದ್ದಿದ್ದ ಮರವೊಂದು ತಲೆಗೆ ಬಿದ್ದು ಕಡಬದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಬುಧವಾರದಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಕಡಬ ಗ್ರಾಮದ ಪಣೆಮಜಲು ನಿವಾಸಿ ದಿನೇಶ ಯಾನೆ ನಿತ್ಯಾನಂದ ಗೌಡ(35) ಎಂದು ಗುರುತಿಸಲಾಗಿದೆ.
ಕಾಣಿಯೂರು ಸಮೀಪದ ಪುಣ್ಚತ್ತಾರಿನಲ್ಲಿ ಗ್ಯಾರೇಜು ಹೊಂದಿದ್ದ ಇವರು ತನ್ನ ಪತ್ನಿಯ ಮನೆಯಲ್ಲಿದ್ದರೆನ್ನಲಾಗಿದೆ. ಮಂಗಳವಾರ ಸುರಿದ ಭಾರೀ ಗಾಳಿ - ಮಳೆಗೆ ತೋಟದಲ್ಲಿ ಮುರಿದು ಬಿದ್ದಿದ್ದ ಮರದ ಹತ್ತಿರದಿಂದ ಇಂದು ತೆರಳುತ್ತಿದ್ದಾಗ ತಲೆಗೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.