ಪಿಎಫ್ಐ. ಕನ್ನಂಗಾರ್ ವಲಯದ ವತಿಯಿಂದ ಬೃಹತ್ ರಕ್ತದಾನ ಶಿಬಿರ

Update: 2019-04-04 17:46 GMT

ಉಡುಪಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕನ್ನಂಗಾರ್ ವಲಯದ ವತಿಯಿಂದ ವೆನ್ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಹೆಜಮಾಡಿ ಅಲ್ ಅಝ್ಹರ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಮೆಡಿಕಲ್ ಉಸ್ತುವಾರಿ ಇಲ್ಯಾಸ್ ಬಜ್ಪೆ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕನ್ನಂಗಾರ್ ವಲಯಾಧ್ಯಕ್ಷ ಅಬೂಬಕರ್ ಸಿದ್ದೀಕ್   ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಇನ್ಚಾರ್ಜ್ ಡಾ. ಅಂತೋನಿ, ಕರ್ನಾಟಕ ದಲಿತ ಸಮಾಜ ಮೈಸೂರು ವಿಭಾಜ್ಯ ಸಂಚಾಲಕ ಶೇಖರ್ ಹೆಜಮಾಡಿ, ಸಿಯಾಲಿ ಹಾಜಿ ಕನ್ನಂಗಾರ್, ಮೊಯಿದು ಕುಟ್ಟಿ ಹಾಜಿ ಹೆಜಮಾಡಿ, ಸಲಾಂ ಕನ್ನಂಗಾರ್ ಮುಂತಾದವರು ಉಪಸ್ಥಿತಿತರಿದ್ದರು.

ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಜಿಲ್ಲಾ ವ್ಯಾಪ್ತಿಯ 302ನೇ ರಕ್ತದಾನ ಶಿಬಿರ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News