ಸ್ವಲಾತ್ ವಾರ್ಷಿಕೋತ್ಸವ: ಎಣ್ಮೂರಿಗೆ ಶಾಕಿರ್ ಬಾಖವಿ ಮಂಬಾಡ್

Update: 2019-04-06 08:18 GMT

ಸುಳ್ಯ, ಎ. 6: ಜುಮಾ ಮಸ್ಜಿದ್ ದರ್ಗಾ ಶರೀಫ್ ಎಣ್ಮೂರು-ಐವತ್ತೊಕ್ಲು ಇದರ ಅಧೀನದಲ್ಲಿ ಪ್ರತಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ‌ ನಡೆಸಿಕೊಂಡು ಬರುವ ಸ್ವಲಾತುಲ್ ಕಫೀಲಿ ಬಿಶ್ಯಫಾ ಸ್ವಲಾತ್ ಮಜ್ಲಿಸ್ ಇದರ ವಾರ್ಷಿಕೋತ್ಸವವು ಇಂದು ಮಗ್ರಿಬ್ ನಮಾಝ್ ಬಳಿಕ ಮಸೀದಿ‌ ವಠಾರದಲ್ಲಿ ನಡೆಯಲಿದೆ.

ಅಲ್ಹಾಜ್ ಝೈನುಲ್ ಆಬಿದೀನ್ ತಂಙಲ್ ಅಲ್ ಬುಖಾರಿ ಎಣ್ಮೂರು ಮುಚ್ಚಿಲ ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ. ವಾಗ್ಮಿ ಶಾಕಿರ್‌ ಬಾಖವಿ ಮಂಬಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News