ಉಡುಪಿ: ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಗಳಿಂದ ಮತಯಾಚನೆ
Update: 2019-04-13 10:10 GMT
ಉಡುಪಿ, ಎ.13: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರವಾಗಿ ಅವರ ಪುತ್ರಿ ಪ್ರತ್ಯಕ್ಷಾ ಪ್ರಮೋದ್ ಇಂದು ವಿವಿಧ ಕೆಗಳಲ್ಲಿ ಮತಯಾಚನೆ ನಡೆಸಿದರು.
ಹೆಬ್ರಿ ಸಂತೆಕಟ್ಟೆ ಹಾಗೂ ಮುದ್ದೂರುಗಳಲ್ಲಿ ಕ್ಯಾಶ್ಯೂ ಫ್ಯಾಕ್ಟರಿ, ಉಡುಪಿ ಪುತ್ತೂರು ಗ್ರಾಮದ ಬಾಳಿಗಾ ಫಿಶ್ನೆಟ್, ಮಣಿಪಾಲ ಈಶ್ವರನಗರದ ಟಿಎಂಎ ಪೈ ಪಾಲಿಟೆಕ್ನಿಕ್, ಮಣಿಪಾಲ ಕೆಎಂಎಫ್ ನಂದಿನಿ ಹಾಲಿನ ಡೈರಿಗೆ ತೆರಳಿ ತೆನೆಹೊತ್ತ ಮಹಿಳೆಯ ಚಿಹ್ನೆಗೆ ಮತ ಹಾಕುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ವರೋನಿಕಾ ಕರ್ನೆಲಿಯೋ, ಚಂದ್ರಿಕಾ ಶೆಟ್ಟಿ, ರಮೇಶ್ ಕಾಂಚನ್, ಯವರಾಜ್, ಡಾ. ಸುನೀತಾ ಶೆಟ್ಟಿ, ರೋಶಿನಿ ಒಲಿವೇರಾ ಮೊದಲಾದವರು ಉಪಸ್ಥಿತರಿದ್ದರು.