ನೇಮೋತ್ಸವದಲ್ಲಿ ಶರ್ತ ಉಲ್ಲಂಘನೆ: ಪ್ರಕರಣ ದಾಖಲು

Update: 2019-04-13 17:04 GMT

ಕಾಪು, ಎ.13: ಕಟಪಾಡಿ ಸಮೀಪದ ಫಾರೆಸ್ಟ್ ಗೇಟ್ ಬಳಿಯ ಶ್ರೀಬಬ್ಬು ಸ್ವಾಮಿ ದೈವಸ್ಥಾನದ ವಾರ್ಷಿಕ ನೇಮೋತ್ಸವದಲ್ಲಿ ಧ್ವನಿವರ್ಧಕಕ್ಕೆ ಪರವಾನಿಗೆ ಶರ್ತ ಉಲ್ಲಂಘನೆ ಮತ್ತು ಲಕ್ಕಿಡಿಪ್ ಮಾರಾಟ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ.10ರಂದು ರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಅಳವಡಿ ಸಲು ಪಡೆದಿರುವ ಪರವಾನಿಗೆ ಪತ್ರದಲ್ಲಿನ ಷರತ್ತವನ್ನು ಉಲ್ಲಂಘಿಸಿರುವ ಬಗ್ಗೆ ಹಾಗೂ ಅದೇ ಸ್ಥಳದ ಚುನಾವಣಾಧಿಕಾರಿಯವರಿಂದ ಅನುಮತಿಯನ್ನು ಪಡೆಯದೆ ಸೇವಾ ಕೌಂಟರ್‌ನಲ್ಲಿ ಬಹುಮಾನವುಳ್ಳ ಲಕ್ಕಿಡಿಪ್ ಮಾರಾಟ ಮಾಡುತ್ತಿರುವ ಬಗ್ಗೆ ಕಾಪು ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿ ರಾಘವ ಶೆಟ್ಟಿ ನೀಡಿದ ದೂರಿನಂತೆ ಆಯೋಜರಕ ಪ್ರಭಾಕರ ಕೆ ಪಾಲನ್(54) ಎಂಬವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News