ಅಕ್ರಮ ಮರಳುಗಾರಿಕೆ: ಇಬ್ಬರ ಬಂಧನ
Update: 2019-04-13 17:05 GMT
ಶಿರ್ವ, ಎ.13: ಕುರ್ಕಾಲು ಗ್ರಾಮದ ಕುಲೇದು ಎಂಬಲ್ಲಿ ಪಾಪನಾಶಿನಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಟಿಪ್ಪರ್ ಸಹಿತ ಇಬ್ಬರನ್ನು ಶಿರ್ವ ಪೊಲೀಸರು ಎ.12ರಂದು ಮಧ್ಯರಾತ್ರಿ ವೇಳೆ ಬಂಧಿಸಿದ್ದಾರೆ.
ಟಿಪ್ಪರಿನ ಚಾಲಕ ಬಂಟಕಲ್ ಅರಸೀಕಟ್ಟೆಯ ಅವಿನಾಶ್(27) ಮತ್ತು ಸುಭಾಸ್ನಗರದ ಹೃದಯ ಆಲಿಯಾಸ್ ಚಿನ್ನು(24) ಬಂಧಿತ ಆರೋಪಿಗಳು. ಇವರಿಂದ ಟಿಪ್ಪರ್ ಸಹಿತ 10,000 ರೂ. ಮೌಲ್ಯದ 2 ಯುನಿಟ್ ಮರಳು ಹಾಗೂ ಚಿನ್ನು ಅವರ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಉತ್ತರ ಪ್ರದೇಶ ರಾಜ್ಯದ ಕೂಲಿ ಕಾರ್ಮಿಕರು ಓಡಿ ಪರಾರಿ ಯಾಗಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.