ಬಿಜೆಪಿ ಸೈಕಲ್ ಜಾಥಾದಲ್ಲಿ ಶರ್ತ ಉಲ್ಲಂಘನೆ: ಪ್ರಕರಣ ದಾಖಲು

Update: 2019-04-14 16:04 GMT

ಉಡುಪಿ, ಎ.14: ಬಿಜೆಪಿ ಪಕ್ಷದ ವತಿಯಿಂದ ಎ.12ರಂದು ಸಂಜೆ ಹಮ್ಮಿಕೊಳ್ಳಲಾದ ಸೈಕಲ್ ಜಾಥಾದಲ್ಲಿ ಅನುಮತಿ ಪತ್ರದ ಷರತ್ತುಗಳು ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣಾ ನೋಡಲ್ ಅಧಿಕಾರಿಗಳ ಸೂಚನೆಯನ್ನು ದಿಕ್ಕರಿಸಿ, ಹಳೆ ಡಯಾನ ಸರ್ಕಲ್ ಮೀರಿ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯವರೆಗೂ ಸೈಕಲ್ ಜಾಥಾವನ್ನು ನಡೆಸಿದ್ದಲ್ಲದೇ, ಜಾಥಾದಲ್ಲಿ ಭಾಗವಹಿಸಿದವರಿಗೆ ಟಿ ಶರ್ಟ್ ಹಂಚಲಾಗಿದೆ.

ಜಾಥಾದಲ್ಲಿ ಉಪಯೋಗಿಸಿದ ಕ್ಯಾಪ್ ಮತ್ತು ಇತರ ವಸ್ತುಗಳ ಖರ್ಚು ವೆಚ್ಚದ ವಿವರವನ್ನು ನೀಡದಿದ್ದು, ಜಾಥಾದಲ್ಲಿ ನಿಯಮಕ್ಕೆ ವಿರುದ್ಧವಾಗಿ ಮಕ್ಕಳನ್ನು ಉಪಯೋಗಿಸಿಕೊಳ್ಳಲಾಗಿದೆ. ಅನುಮತಿಗೆ ವಿರುದ್ದವಾಗಿ ಪಕ್ಷದ ಹಾಗೂ ಧಾರ್ಮಿಕ ಧ್ವಜಗಳನ್ನು ಸೈಕಲ್ ಜಾಥಾದಲ್ಲಿ ಬಳಸಿಕೊಳ್ಳಲಾಗಿದೆ ಹಾಗೂ ಸಾರ್ವಜನಿಕರ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಯನು್ನಂಟು ಮಾಡಿರುವ ಬಗ್ಗೆ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News