ಅಂದರ್ ಬಾಹರ್: 9 ಮಂದಿ ಸೆರೆ

Update: 2019-04-14 16:05 GMT

ಉಡುಪಿ, ಎ.14: ಉಪ್ಪೂರು ಗ್ರಾಮದ ಅಮ್ಮುಂಜೆಗುಡ್ಡೆ ಬಳಿ ಎ.14ರಂದು ನಸುಕಿನ ವೇಳೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಒಂಭತ್ತು ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರವಿರಾಜ್, ಡೋಲ್ಪಿ ಮಸ್ಕರೇನ್ಸ್, ದಿನಕರ, ವರುಣ್, ಉಮೇಶ್, ಪ್ರಜ್ಞೇಶ್, ಕಾಂತು, ರವಿ, ಭಾಸ್ಕರ ಬಂಧಿತ ಆರೋಪಿಗಳು. ಇವರಿಂದ 15,580ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News