ಮಂಗಳೂರು: ಕಂಬಕ್ಕೆ ಬೈಕ್ ಢಿಕ್ಕಿ; ಕಾರ್ಮಿಕ ಮೃತ್ಯು

Update: 2019-04-14 16:13 GMT

ಮಂಗಳೂರು, ಎ.14: ಬೈಕ್‌ವೊಂದು ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಿನ್ನಿಕಂಬಳದ ಶಾಲೆ ಸಮೀಪ ರವಿವಾರ ಮಧ್ಯಾಹ್ನ ನಡೆದಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಹಾಗೂ ಪ್ರಸ್ತುತ ಕುಲಶೇಖರ ನಿವಾಸಿ ಮಹಾಂತೇಶ್ (22) ಮೃತ ಸವಾರ.

ಮೃತ ಯುವಕನು ಬಾಗಲಕೋಟೆಯಿಂದ ಕೆಲಸಕ್ಕಾಗಿ ಮಂಗಳೂರಿಗೆ ವಲಸೆ ಬಂದಿದ್ದು, ಕೆಲವು ತಿಂಗಳಿನಿಂದ ಕುಲಶೇಖರದಲ್ಲಿ ಕಾರ್ಮಿಕನಾಗಿ ದುಡಿಯು ತ್ತಿದ್ದ. ಸವಾರನು ರವಿವಾರ ಮಧ್ಯಾಹ್ನ 2 ಗಂಟೆ ಸುಮಾರು ಕೈಕಂಬದಿಂದ ಬಜ್ಪೆ ಮಾರ್ಗವಾಗಿ ಬೈಕ್‌ನ್ನು ಚಲಾಯಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಕಿನ್ನಿಕಂಬಳದ ಶಾಲೆ ಸಮೀಪ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಸವಾರ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News