ಕೊಣಾಜೆ: ಇಬ್ರಾಹಿಂ ಕೋಡಿಜಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಪರ ವಾಹನ ಜಾಥ

Update: 2019-04-14 18:08 GMT

ಕೊಣಾಜೆ: ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ನೇತೃತ್ವದಲ್ಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿರುಸಿನ ಮತ ಪ್ರಚಾರವು ಕೊಣಾಜೆ ಜಂಕ್ಷನ್ ನಿಂದ ಅಡ್ಕರೆಪಡ್ಪು ವರೆಗೆ ವಾಹನ ಜಾಥ ನಡೆಯಿತು. 

ಅಡ್ಕರೆಪಡ್ಪುವಿನಲ್ಲಿ ಸೇರಿದ ಕಾರ್ಯಕರ್ತರುನ್ನುದ್ದೇಶಿಸಿ ಮಾತನಾಡಿದ ಹಾಜಿ ಇಬ್ರಾಹಿಂ ಕೋಡಿಜಾಲ್ ಅವರು ಯುವ ನಾಯಕ ಮಿಥುನ್ ರೈ ಪರವಾಗಿ    ಮತಯಾಚಿಸಿದರು.

ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್  ಹಾಗೂ ತಾ. ಪಂ. ಸದಸ್ಯೆ ಪದ್ಮಾವತಿ, ಗ್ರಾ. ಪಂ. ಸದಸ್ಯರಾದ ಅಚ್ಚುತ ಗಟ್ಟಿ , ಖಾದರ್ ಅಡ್ಕರೆ, ತಾಹಿರ, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ಗಟ್ಟಿ ,ಸಲೀಂ ಮೇಘಾ, ಇಕ್ಬಾಲ್ ಸಾಮಾನಿಗೆ, ಸುಲೈಮಾನ್ ಹಾಜಿ, ಅಬ್ದುಲ್ ರಹಿಮಾನ್ ಎಕೆ, ಇಕ್ಬಾಲ್ ಕೊಣಾಜೆ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು   ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News