ಕಾರು-ಸ್ಕೂಟರ್ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು

Update: 2019-04-16 07:27 GMT

ಕಾಸರಗೋಡು, ಎ.16: ಕಾರು ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕರಂದಕ್ಕಾಡ್ ನಲ್ಲಿ ನಡೆದಿದೆ. 

ಮೃತರನ್ನು ಎರಿಯಾಲ್ ಬ್ಲಾರ ಕ್ಕೋಡ್ ನಿವಾಸಿ ಅಹ್ರಾಝ್(22) ಎಂದು ಗುರುತಿಸಲಾಗಿದೆ. 

ಮಲಪ್ಪುರಂನಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರು ಮತ್ತು ಎರಿಯಾಲ್ ನಿಂದ ಕಾಸರಗೋಡಿಗೆ ಬರುತ್ತಿದ್ದ ಸ್ಕೂಟರ್ ನಡುವೆ ಈ ಅಪಘಾತ ನಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಅಹ್ರಾಝ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

 ಕ್ರಿಕೆಟ್ ಆಟಗಾರನಾಗಿದ್ದ ಅಹ್ರಾಝ್ ತರಬೇತಿಗಾಗಿ ಚೆಮ್ನಾಡ್ ಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಇವರು ಕೆಲದಿನಗಳ ಹಿಂದೆ ಗಲ್ಫ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡು ಊರಿಗೆ ಮರಳಿದ್ದರು. 

ಕಾಸರಗೋಡು ನಗರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News