ಉಡುಪಿ: ಎ.20ರಂದು ಶಬೇ ಬರಾಅತ್ ರಾತ್ರಿ
Update: 2019-04-16 15:14 GMT
ಉಡುಪಿ, ಎ.16: ಬರಾಅತ್ ಎ.20ರ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿಯಾಗಿದ್ದು, ಎ.21ರಂದು ರವಿವಾರ ಹಗಲು ಉಪವಾಸ ಆಗಿದೆ ಎಂದು ಉಡುಪಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾಅ ಶೈಖುನಾ ಬೇಕಲ ಉಸ್ತಾದ್ ಇಬ್ರಾಹಿಮ್ ಮುಸ್ಲಿಯಾರ್ ತಿಳಿಸಿರುವುದಾಗಿ ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯ ದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.