ನಾಡ ಗ್ರಾಮದಲ್ಲಿ ಸಿಪಿಎಂ ಚುನಾವಣಾ ಪ್ರಚಾರ

Update: 2019-04-16 15:18 GMT

ಕುಂದಾಪುರ, ಎ.16: ಬೈಂದೂರು ವಿಧಾನಸಭಾ ವ್ಯಾಪ್ತಿಯ ನಾಡ ಗ್ರಾಮ ದಲ್ಲಿ ಸಿಪಿಎಂ ಪಕ್ಷವು ಸ್ವತಂತ್ರವಾಗಿ ಮನೆ ಮನೆ ಚುನಾವಣಾ ಪ್ರಚಾರ ಕಾರ್ಯ ವನ್ನು ಇಂದು ಆರಂಭಿಸಿತು.

ಅತ್ಯಂತ ಅಪಾಯಕಾರಿ ನೀತಿಗಳನ್ನು ಜಾರಿ ಮಾಡಿ ಬಡವರು, ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿರುವ ಬಿಜೆಪಿ ಮೈತ್ರಿಕೂಟ ಸೋಲಿಸಬೇಕೆಂದು ಮನೆ ಮನೆಗೆ ಸಿಪಿಎಂ ಕಾರ್ಯಕರ್ತರು ಕರಪತ್ರ ಹಿಡಿದು ಜನರಲ್ಲಿ ಮನವಿ ಮಾಡಿದರು. ಈ ವೇಳೆಯಲ್ಲಿ ಸಿಪಿಎಂ ಬೈಂದೂರು ವಲಯ ಸಮಿತಿಯ ಮುಖಂಡರಾದ ರಾಜೀವ ಪಡುಕೋಣೆ, ಸುರೇಶ್ ಕಲ್ಲಾಗರ, ನಾಗರತ್ನ ನಾಡ, ಪರಮೇಶ್ವರ ಗಾಣಿಗ, ಆನಂದ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News