ಕಾರು ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2019-04-16 16:24 GMT
ಬ್ರಹ್ಮಾವರ, ಎ.16: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಹೊಸಾಳ ಗ್ರಾಮದ ಬಾರ್ಕೂರು -ಸಾಯಿಬರಕಟ್ಟೆ ರಸ್ತೆಯ ಬನಶಂಕರಿ ಎಂಟರ್ಪ್ರೈಸಸ್ ಬಳಿ ಎ.14ರಂದು ರಾತ್ರಿ 11ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಹೊಸಾಳ ನಾಗರಮಠ ನಿವಾಸಿ ಪ್ರದೀಪ ಶೆಟ್ಟಿ ಎಂದು ಗುರು ತಿಸಲಾಗಿದೆ. ಬಾರಕೂರು ಕಡೆಯಿಂದ ಹೊಸಾಳ ನಾಗರಮಠ ಕಡೆಗೆ ಹೋಗುತ್ತಿದ್ದ ಬೈಕಿಗೆ ಸಾಯಿಬರಕಟ್ಟೆ ಕಡೆಯಿಂದ ಬಾರ್ಕೂರು ಕಡೆಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ ಎನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರದೀಪ್ ಶೆಟ್ಟಿಯನ್ನು ಸ್ಥಳೀಯರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಎ.15ರಂದು ನಸುಕಿನ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.