ವಿದ್ಯಾರ್ಥಿ ಆತ್ಮಹತ್ಯೆ
Update: 2019-04-16 16:29 GMT
ಬ್ರಹ್ಮಾವರ, ಎ.16: ಶಾಲಾ ಸಹಪಾಠಿಗಳ ಹಣ ತೆಗೆದ ವಿಚಾರದಲ್ಲಿ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.15ರಂದು ಮಧ್ಯಾಹ್ನ ವೇಳೆ ಹಾವಂಜೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ನಡೆದಿದೆ.
ಗೋಳಿಕಟ್ಟೆಯ ಸುಲೋಚನ ಎಂಬವರ ಮಗ ದೀಪಕ್ (13) ಮೃತ ವಿದ್ಯಾರ್ಥಿ. ಈತ ಎಂಟನೆ ತರಗತಿಯ ವಿದ್ಯಾರ್ಥಿಯಾಗಿದ್ದು, 10 ದಿನಗಳ ಹಿಂದೆ ಶಿಕ್ಷಕರೊಬ್ಬರು ಕರೆ ಮಾಡಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯ ಹಣ ಕಾಣೆಯಾಗಿದ್ದು, ನಿಮ್ಮ ಮಗ ತೆಗೆದಿದ್ದಾನೆಯೇ ಎಂದು ಸುಲೋಚನಾರಲ್ಲಿ ಕೇಳಿದ್ದರು.
ಅಲ್ಲದೆ ಎ.14ರಂದು ಮೂವರು ಮಕ್ಕಳು ಮನೆ ಬಳಿ ಬಂದು ಇದೇ ವಿಚಾರದಲ್ಲಿ ದೀಪಕ್ನನ್ನು ಪ್ರಶ್ನಿಸಿದ್ದರೆನ್ನಲಾಗಿದೆ. ಇದರಿಂದ ಮನನೊಂದ ದೀಪಕ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.