ಎಸ್ಸೆಸ್ಸೆಫ್ ಎಲಿಮಲೆ, ಗುತ್ತಿಗಾರು ಶಾಖೆ: ಇರ್ಶಾದಿಯ್ಯ ಕ್ಯಾಂಪ್, ಆದೂರು ತಂಙಳ್ ಅನುಸ್ಮರಣೆ

Update: 2019-04-19 11:25 GMT

ಸುಳ್ಯ,ಎ.19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಎಲಿಮಲೆ ಹಾಗೂ ಗುತ್ತಿಗಾರು ಶಾಖೆಗಳ ಜಂಟಿ ಆಶ್ರಯದಲ್ಲಿ ಇರ್ಶಾದಿಯ್ಯ ಇಲ್ಫಾ ಕ್ಯಾಂಪ್ ಹಾಗೂ ಆದೂರು ಆಟ್ಟು ತಂಙಳ್ ಅನುಸ್ಮರಣೆ ಕಾರ್ಯಕ್ರಮ ದೊಡ್ಡಂಗಡಿ ಹೌಸಿನಲ್ಲಿ ಎಲಿಮಲೆ ಶಾಖಾಧ್ಯಕ್ಷ ಝಕರಿಯ್ಯ ಸಅದಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಕೆಸಿಎಫ್ ನಾಯಕರಾದ ಸಿದ್ದೀಖ್ ಅಂಜದಿ ಮೆತ್ತಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವ ವಾಗ್ಮಿ ಹಾರಿಸ್ ಮಿಸ್ಬಾಹಿ ಪೈಂಬಚ್ಚಾಲ್ ಸಂಘಟನಾ ತರಗತಿ ನಡೆಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರಧಾನ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ನಾಯಕರಾದ ಸ್ವಬಾಹುದ್ದೀನ್ ಹಿಮಮಿ ಸಖಾಫಿ ಬೀಜಕೊಚ್ಚಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಟ್ಟು ತಂಙಳ್ ರವರ ಹೆಸರಿನಲ್ಲಿ ತಹ್ಲೀಲ್ ಹಾಗೂ ಪ್ರಾರ್ಥನಾ ಮಜ್ಲಿಸ್ ನಡೆಸಲಾಯಿತು.

ಖಾಲಿದ್ ಮಿಸ್ಬಾಹಿ ಗುತ್ತಿಗಾರು, ಇಬ್ರಾಹಿಂ ಮುಸ್ಲಿಯಾರ್ ಪೈಂಬಚ್ಚಾಲ್, ಎಸ್ವೈಎಸ್ ನಾಯಕ ಸಿದ್ದೀಖ್ ಕಟ್ಟೆಕ್ಕಾರ್, ಡಿವಿಷನ್ ಕಾರ್ಯದರ್ಶಿ ನೌಶಾದ್ ಕೆರೆಮೂಲೆ, ಯುನಿಟ್ ಉಸ್ತುವಾರಿ ಅಬ್ದುರ್ರಹೀಂ ಪೈಂಬಚ್ಚಾಲ್, ಹಸೈನಾರ್ ವಳಲಂಬೆ, ಗುತ್ತಿಗಾರು ಯುನಿಟ್ ಅಧ್ಯಕ್ಷರಾದ ಅಬೂಸ್ವಾಲಿಹ್ ವಳಲಂಬೆ ಸೇರಿ ಅನೇಕರು ಉಪಸ್ಥಿತರಿದ್ದರು.

ಪ್ರ.ಕಾರ್ಯದರ್ಶಿ ನಾಸಿರ್ ವೈ.ಎಚ್ ಸ್ವಾಗತಿಸಿ, ಸಾಬಿತ್ ಪಾಣಾಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News