ಎ. 21: ಡಿವಿಜಿ-ಬಿಜಿಎಲ್ ಪ್ರಶಸ್ತಿ ಪ್ರದಾನ

Update: 2019-04-19 13:59 GMT

ಮಂಗಳೂರು, ಎ.19: ಮಂಗಳೂರಿನ ಡಿವಿಜಿ ಬಳಗ ಪ್ರತಿಷ್ಠಾನದ ವತಿಯಿಂದ ‘ಡಿವಿಜಿ-ಬಿಜಿಎಲ್-2019’ ಪ್ರಶಸ್ತಿ ಪ್ರದಾನ ಸಮಾರಂಭವು ಎ.21ರಂದು ಬೆಳಗ್ಗೆ 10 ಗಂಟೆಗೆ ನಗರದ ಕೊಡಿಯಾಲ್‌ಬೈಲ್‌ನ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಐದನೇ ವರ್ಷದ ಪ್ರಶಸ್ತಿಯನ್ನು ‘ಕಗ್ಗಕ್ಕೊಂದು ಕೈಪಿಡಿ’ ಮತ್ತು ‘ವಿರಕ್ತ ರಾಷ್ಟ್ರಪ್ರೇಮಿ ಡಿವಿಜಿ’ಯಂತಹ ಕೃತಿ ರಚಿಸಿ ಡಿವಿಜಿಯವರ ನಿಕಟ ವರ್ತಿಗಳಾದ ಬೆಂಗಳೂರಿನ ದಿ.ಡಿ.ಆರ್.ವೆಂಕಟರಮಣನ್ ಮತ್ತು ಸರಸ್ವತಿ ವೆಂಕಟರಮಣನ್ ಅವರಿಗೆ ಪ್ರದಾನ ಮಾಡಲಾಗುವುದು. ಡಾ. ಟಿ.ಎಸ್.ಚನ್ನೇಶ್ ಅವರಿಗೆ ಬಿಜಿಎಲ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ಣಾಟಕ ಬ್ಯಾಂಕ್‌ನ ಎಂಡಿ ಹಾಗೂ ಸಿಇಒ ಎಂ.ಎಸ್. ಮಹಾಬಲೇಶ್ವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News