ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆ: ಪ್ರಜ್ಞಾ ಠಾಕೂರ್ ಗೆ ಚು. ಆಯೋಗದ ನೋಟಿಸ್

Update: 2019-04-20 11:32 GMT

ಭೋಪಾಲ್, ಎ.20: ಮುಂಬೈಯಲ್ಲಿ ನಡೆದ 26/11 ದಾಳಿಯ ವೇಳೆ ಉಗ್ರರಿಂದ ಹತರಾದ ಮಹಾರಾಷ್ಟ್ರ ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ನೀಡಿದ ಹೇಳಿಕೆಗಾಗಿ ಮಾಲೆಗಾಂವ್ ಸ್ಫೋಟ ಆರೋಪಿ ಹಾಗೂ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.

ತಾನು ಕರ್ಕರೆಗೆ ಶಾಪ ನೀಡಿದ್ದರಿಂದ ಅವರು ಸತ್ತರೆಂದು ಪ್ರಜ್ಞಾ ಸಿಂಗ್ ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೀಡಾದ ನಂತರ ಆಕೆ ತನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದರಲ್ಲದೆ ಕ್ಷಮೆಯನ್ನೂ ಕೋರಿದ್ದರು.

“ಪ್ರಕರಣವನ್ನು ಸ್ವಯಂಪ್ರೇರಣೆಯಿಂದ ಪರಿಗಣಿಸಿದ ಆಯೋಗ ಸಹಾಯಕ ಚುನಾವಣಾಧಿಕಾರಿಯಿಂದ ವರದಿ ಕೇಳಿದ್ದು, ಇಂದು ಬೆಳಗ್ಗೆ ವರದಿ ದೊರಕಿದೆ. ಅವರಿಗೆ ನೋಟಿಸ್ ಜಾರಿಗೊಳಿಸಲಾಗುವುದು'' ಎಂದು ಭೋಪಾಲ್ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸುದಮ್ ಖಡೆ ಹೇಳಿದ್ದರು.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂಘಟಕರಿಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು.

ಪ್ರಜ್ಞಾ ಸಿಂಗ್ ಹೇಳಿಕೆ ವಿವಾದಕ್ಕೀಡಾಗಿದ್ದರೂ ಈ ವಿಚಾರದಿಂದ ದೂರ ಸರಿದು ನಿಂತ ಬಿಜೆಪಿ ಅದು ಆಕೆಯ ವೈಯಕ್ತಿಕ ಹೇಳಿಕೆಯಾಗಿದೆ. ಹಲವು ವರ್ಷಗಳಿಂದ ಅನುಭವಿಸಿದ ದೈಹಿಕ, ಮಾನಸಿಕ ಯಾತನೆಯಿಂದ ಆಕೆ ಹೀಗೆ ಹೇಳಿರಬಹುದು' 'ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News