ಮಣಿಪಾಲ: ಕ್ರಿಕೆಟ್ ಶಿಬಿರಕ್ಕೆ ರಾಹುಲ್ ದ್ರಾವಿಡ್ ಭೇಟಿ

Update: 2019-04-23 13:11 GMT

ಮಣಿಪಾಲ, ಎ.23: ಯಾವನೇ ಒಬ್ಬ ವ್ಯಕ್ತಿ ಕೇವಲ ಪ್ರತಿಭಾವಂತನಾಗಿದ್ದರೆ ಸಾಲದು. ಆ ಪ್ರತಿಭೆಯನ್ನು ನಿರಂತರ ಸಾಣೆಗೊಡ್ಡುತ್ತಾ ಮುಂದೆ ಸಾಗಿದರೆ ಮಾತ್ರ ಉದ್ದೇಶಿತ ಗುರಿಯನ್ನು ತಲಪಲು ಸಾಧ್ಯ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ‘ಭಾರತೀಯ ಕ್ರಿಕೆಟ್‌ನ ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ರಾಬಿನ್ ಸಿಂಗ್ ಸ್ಪೋರ್ಟ್ಸ್ ಅಕಾಡೆಮಿ, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಸಹಯೋಗದೊಂದಿಗೆ ಮಣಿಪಾಲದ ಎಂಡ್‌ಪಾಯಿಂಟ್‌ನ ಮಾಹೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿರುವ ಕಿರಿಯರ ಕ್ರಿಕೆಟ್ ತರಬೇತಿ ಶಿಬಿರಕ್ಕೆ ಭೇಟಿ ನೀಡಿ, ಕಿರಿಯ ಕ್ರಿಕೆಟ್ ಆಟಗಾರರಿಗೆ ಶುಭ ಹಾರೈಸಿ ಮಾತನಾಡಿದರು.

ಪ್ರತಿಭೆಯೊಂದಿಗೆ ಕಠಿಣ ಪರಿಶ್ರಮ ಮಾತ್ರ ನಿಮ್ಮನ್ನು ಯಶಸ್ಸಿನೆಡೆಗೆ ಮುನ್ನಡೆಸುತ್ತದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News