ವೇಣೂರು ದಅವಾ ಸಮಿತಿ ರಚನೆ
ಬೆಳ್ತಂಗಡಿ ಎ,21: ಎಸ್ಸೆಸ್ಸೆಫ್ ವೇಣೂರು ಸೆಕ್ಟರ್ ವತಿಯಿಂದ ದಅವಾ ಸಮಿತಿ ರಚನೆಯು ತಾಜುನ್ನೂರು ಎಜುಕೇಷನಲ್ ಅಕಾಡೆಮಿ ಗೋಳಿಯಂಗಡಿ ಅಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಜೌಹರ್ ಅಹ್ಸನಿ ವೇಣೂರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ತೌಫೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಅವಾ ಸಮಿತಿಯ ಪ್ರಯೋಜನದ ಕುರಿತು ಝುಬೈರ್ ಶಾಂತಿನಗರ ವಿವರಿಸಿದರು.
ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು. ದಅವಾ ಚೆಯರ್ಮಾನ್ ಆಗಿ ಜೌಹರ್ ಅಹ್ಸನಿ, ಕನ್ವಿನರ್ ಆಗಿ ಇರ್ಫಾನ್ ಸಖಾಫಿ ಮತ್ತು ಕೋಶಾಧಿಕಾರಿಯಾಗಿ ಮಹಮ್ಮದ್ ಅಲಿ ಮುಈನಿಯನ್ನು ನೇಮಿಸಲಾಯಿತು.
ಪಡ್ಡಂದಡ್ಕ ಮತ್ತು ಪುಲಾಬೆ ಉಸ್ತುವಾರಿಯಾಗಿ ಫೈಝಲ್ ಮುಈನಿ, ವೇಣೂರು ಉಸ್ತುವಾರಿಯಾಗಿ ಜೌಹರ್ ಅಹ್ಸನಿ, ಗೋಳಿಯಂಗಡಿ ಮತ್ತು ಕುಂಡದಬೆಟ್ಟು ಉಸ್ತುವಾರಿಯಾಗಿ ಮಹಮ್ಮದ್ ಅಲಿ ಮುಈನಿ, ಉಲ್ತೂರು ಉಸ್ತುವಾರಿಯಾಗಿ ಫಾರೂಕ್ ಸಅದಿಯ ಹಾಗೂ ಶಾಂತಿನಗರ ಉಸ್ತುವಾರಿಯಾಗಿ ಇರ್ಫಾನ್ ಸಖಾಫಿಯನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಲೀಂ, ಹೈದರ್ ಅಲಿ, ನೌಫಲ್ ಸೇರಿ ಅನೇಕರು ಉಪಸ್ಥಿತರಿದ್ದರು.