ಯೋಧರ ಅಲಂಬಿತರಿಗೆ ಗುರುತು ಚೀಟಿ ವಿತರಣೆ
Update: 2019-04-23 16:28 GMT
ಉಡುಪಿ, ಎ. 23: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಗೊಳ ಪಡುವ ಮಾಜಿ ಸೈನಿಕರ ಹಾಗೂ ಯುದ್ಧದಂತಹ ಕಾರ್ಯಚರಣೆಯಲ್ಲಿ ಮಡಿದ ಯೋಧರ ಅವಲಂಬಿತರಿಗೆ ಗುರುತು ಚೀಟಿಯನು್ನ ವಿತರಿಸುವ ಕ್ರಮ ಜಾರಿಗೆ ಬಂದಿದೆ.
ಗುರುತು ಚೀಟಿಯನ್ನು ಪಡೆಯಲು ಇಚ್ಚಿಸುವ ಯೋಧರ ಅವಲಂಬಿತರು ಸಂಬಂಧಿಸಿದ ದಾಖಲೆಗಳ ಮಾಹಿತಿ ಮತ್ತು ಅರ್ಜಿ ನಮೂನೆಯನ್ನು ಪಡೆಯಲು ಖುದ್ದಾಗಿ ಕಚೇರಿ ವೇಳೆಯಲ್ಲಿ ಬಂದು ಪಡೆಯಬಹುದು ಎಂದು ಜಂಟಿ ನಿರ್ದೇಶಕರ ಕಾರ್ಯಾಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.