ಹಿರಿಯ ವ್ಯಾಪಾರಿ ಬಿ. ಮೊಹಮ್ಮದ್ ನಿಧನ
Update: 2019-04-23 17:09 GMT
ಮಂಜೇಶ್ವರ, ಎ.23: ಕೇರಳ ವ್ಯಾಪಾರಿ ಏಕೋಪನ ಸಮಿತಿಯ ಸ್ಥಾಪಕ ನೇತಾರ ಹಾಗೂ ಮಾಜಿ ಜಿಲ್ಲಾ ಕಾರ್ಯದರ್ಶಿ ಹಾಗೂ ಮಂಜೇಶ್ವರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಉದ್ಯಾವರ 10 ನೇ ಮೈಲು ನಿವಾಸಿ ಬಿ. ಮೊಹಮ್ಮದ್ (62) ಇಂದು ಮುಂಜಾನೆ ಸ್ವಗ್ರಹದಲ್ಲಿ ನಿಧನರಾದರು.
ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಇವರು ಇತ್ತೀಚೆಗೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಕಳೆದ ರಾತ್ರಿ ಮತ್ತೆ ಇವರು ತೀರಾ ಅಸ್ವಸ್ಥಗೊಂಡು ಇಂದು ಮುಂಜಾನೆ 4.30 ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ.
ರಾಷ್ಟ್ರೀಯ ಹೆದ್ದರಿ ಹೋರಾಟ, ಸಮಿತಿ, ಮಂಜೇಶ್ವರ ಗ್ರಾಹಕರ ವೇದಿಕೆ ಸೇರಿದಂತೆ ಹಲವು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಮೃತರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.