ಭಯೋತ್ಪಾದನೆಯು ಪ್ರೀತಿ, ತ್ಯಾಗದ ಸಂಕೇತ ಎಂದ ಬಿಜೆಪಿ ರಾಜ್ಯಾಧ್ಯಕ್ಷ!: ವಿಡಿಯೋ ವೈರಲ್

Update: 2019-04-24 16:02 GMT

ಭೋಪಾಲ್, ಎ.24: ಭಯೋತ್ಪಾದನೆಯು ಪ್ರೀತಿ, ಪ್ರಾಯಶ್ಚಿತ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ರಾಕೇಶ್ ಸಿಂಗ್ ಹೇಳಿಕೆ ನೀಡಿದ್ದು, ಹೊಸ ವಿವಾದ ಸೃಷ್ಟಿಸಿದ್ದಾರೆ.

ಭೋಪಾಲದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿ ಮಾತನಾಡಿದ ಅವರು, ದಿಗ್ವಿಜಯ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅವರು, “ಕೇಸರಿಯು ಎಂದಿಗೂ ಉಗ್ರವಾದದೊಂದಿಗೆ ನಿಲ್ಲುವುದಿಲ್ಲ.. ಕೇಸರಿ ಧರಿಸುವವರು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಭಯೋತ್ಪಾದನೆಯು ಪ್ರೀತಿ, ಪ್ರಾಯಶ್ಚಿತ ಮತ್ತು ತ್ಯಾಗದ ಸಂಕೇತವಾಗಿದೆ” ಎಂದರು. ಬಿಜೆಪಿ ನಾಯಕನ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News