ಕೊಳಕು ತುಂಬಿದ ಸ್ಥಳದಲ್ಲಿಯೇ ಕಮಲ ಅರಳುತ್ತದೆ: ಪ್ರಧಾನಿ ಮೋದಿ

Update: 2019-04-26 05:11 GMT

ಹೊಸದಿಲ್ಲಿ, ಎ.26: ಕೊಳಕು ತುಂಬಿದ ಸ್ಥಳದಲ್ಲಿಯೇ  ಕಮಲ ಅರಳುತ್ತದೆ.ಜನರ ಪ್ರೀತಿ ವಿಶ್ವಾಸಕ್ಕೆ ನಾನು ಪ್ರತಿ ಕ್ಷಣವೂ ಆಭಾರಿಯಾಗಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ  ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶ ವಾರಣಾಸಿಯಲ್ಲಿ ಶುಕ್ರವಾರ ಲೋಕಸಭೆಗೆ  ಎರಡನೇ ಬಾರಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನ ಮಂತ್ರಿ ನರೇಂದ್ರ  ಮೋದಿ ರೋಡ್ ಶೋ ನಡೆಸಿದರು

ಬಿಜೆಪಿ  ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು ದೇಶದಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು. ತಾಯಂದಿರು, ಸೋದರಿಯರು 21ನೇ ಶತಮಾನದ ಶಕ್ತಿ ಎಂದರು.

ನಾನು ಶ್ರೀಮಂತ ಪರಿವಾರದಿಂದ ಬಂದವನಲ್ಲ.  ನಾನು ಒಬ್ಬ  ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಅಷ್ಟೇ.ಕಾರ್ಯಕರ್ತರ ಪರಿಶ್ರಮ, ವಿಶ್ವಾಸ  ನೋಡಿದ್ದೇನೆ. ನನ್ನನ್ನು ಯಾರಾದರೂ  ದೂರಿದರೆ ಚಿಂತೆ ಮಾಡಬೇಡಿ. ಎಲ್ಲಾ ಬೈಗುಳವನ್ನು ನನ್ನ ಖಾತೆಗೆ ಪೋಸ್ಟ್  ಮಾಡಿ. ಎಲ್ಲಾ ಅಭ್ಯರ್ಥಿಗಳೂ ಗೌರವಯುತರೇ, ಶತ್ರುಗಳಲ್ಲ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News