ಬಿಜೆಪಿ ನಾಯಕ, ತ್ರಿಪುರಾ ಸಿಎಂ ಬಿಪ್ಲಬ್ ದೇವ್ ರಿಂದ ದೌರ್ಜನ್ಯ ಆರೋಪ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

Update: 2019-04-26 10:00 GMT

ಹೊಸದಿಲ್ಲಿ, ಎ.26: ಬಿಜೆಪಿ ನಾಯಕ, ತ್ರಿಪುರಾ ಸಿಎಂ ಬಿಪ್ಲಬ್ ದೇವ್ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು  CNN News18 ವರದಿ ಮಾಡಿದೆ.

ಪತಿ ಬಿಪ್ಲಬ್ ದೇವ್ ತನಗೆ ಕಿರುಕುಳ ನೀಡಿದ್ದಾರೆ ಮತ್ತು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಪತ್ನಿ ನೀತಿ ದೇವ್ ಹೊಸದಿಲ್ಲಿಯ ತಿಝ್ ಹಝಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು CNN News18 ವರದಿ ತಿಳಿಸಿದೆ.

ಈ ಬಗ್ಗೆ ವರದಿಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. “ನೀವು ಬಿಜೆಪಿಯಲ್ಲಿದ್ದ ಮೇಲೆ ಮಹಿಳೆಯರನ್ನು ಕೆಟ್ಟದಾಗಿ ಕಾಣಬೇಕು ಮತ್ತು ದೌರ್ಜನ್ಯ ನಡೆಸಬೇಕು” ,  “ಬಿಪ್ಲಬ್ ದೇವ್ ಬಿಜೆಪಿಯ ನೈಜ ಮುಖ” ಎಂದು ಟ್ವಿಟರಿಗರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News