ಸೈಕ್ಲೋನ್ ಭೀತಿ: ಚುನಾವಣಾ ರ‍್ಯಾಲಿಗಳನ್ನು ರದ್ದುಗೊಳಿಸಿದ ಮಮತಾ

Update: 2019-05-03 09:27 GMT

ಕೋಲ್ಕತಾ, ಮೇ3: ಒಡಿಶಾವನ್ನು ತಲ್ಲಣಗೊಳಿಸಿರುವ ಫನಿ ಚಂಡಮಾರುತ ಪಶ್ಚಿಮಬಂಗಾಳಕ್ಕೂ ಅಪ್ಪಳಿಸುವ ಸಾಧ್ಯತೆಯಿರುವ ಕಾರಣ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿನ 48 ಗಂಟೆಗಳ ಕಾಲ ಯಾವುದೇ ಚುನಾವಣಾ ರ‍್ಯಾಲಿಗಳಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.

ಕರಾವಳಿ ಪ್ರದೇಶ ಖರಗ್‌ಪುರದಲ್ಲಿರುವ ಮಮತಾ ಖುದ್ದಾಗಿ ಎಲ್ಲ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಮಮತಾ ಇಂದು ಮಿಡ್ನಾಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು.

ಚಂಡಮಾರುತ ಈಶಾನ್ಯ ಭಾಗದಲ್ಲಿ ಬೀಸಲಿದ್ದು, ನಿಧಾನವಾಗಿ ಪಶ್ಚಿಮಬಂಗಾಳವನ್ನು ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News