ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ ಆನಂದ ರಾಜ್ ಕಾಂಗ್ರೆಸ್‌ ಗೆ ಸೇರ್ಪಡೆ

Update: 2019-05-05 16:32 GMT

  ಹೊಸದಿಲ್ಲಿ,ಮೇ 5: ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ರಿಪಬ್ಲಿಕನ್ ಸೇನಾದ ಅಧ್ಯಕ್ಷ ಆನಂದ ರಾಜ್ ಅಂಬೇಡ್ಕರ್ ಅವರು ಶನಿವಾರ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ ಅವರು ದಿಲ್ಲಿಯ ಎಲ್ಲ 7 ಲೋಕಸಭಾ ಕ್ಷೇತ್ರಗಳಿಂದ ತನ್ನ ಪಕ್ಷದ ಅಭ್ಯರ್ಥಿಗಳನ್ನು ಹಿಂದೆಗೆದುಕೊಂಡಿರುವುದಾಗಿ ಪ್ರಕಟಿಸಿದ್ದಾರೆ.

  ರಿಪಬ್ಲಿಕನ್ ಸೇನಾದ ದಿಲ್ಲಿ ಘಟಕದ ಅಧ್ಯಕ್ಷ ರಾಕೇಶ ಪ್ರಜಾಪತಿ ಮತ್ತು ಪಕ್ಷದ ಸಾವಿರಾರು ಬೆಂಬಲಿಗರೂ ಕಾಂಗ್ರೆಸ್‌ ಗೆ ಸೇರ್ಪಡೆಗೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ ರಾಜ್,ಅಂಬೇಡ್ಕರ್ ಅವರ ಕನಸುಗಳನ್ನು ಕಾಂಗ್ರೆಸ್ ಮಾತ್ರ ನನಸಾಗಿಸಬಲ್ಲುದು ಎಂದರು.

ಘೋಂಡಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಬಿ.ಟಿ.ಶರ್ಮಾ ಮತ್ತು ದಿಲ್ಲಿ ಪ್ರದೇಶ ಪೂರ್ವಾಂಚಲ ಗಣ ಪರಿಷದ್‌ನ ಅಧ್ಯಕ್ಷ ನಿರ್ಮಲ್ ಪಾಠಕ್ ಅವರೂ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News