ನನ್ನ ಕೆಟ್ಟ ಭೀತಿ ನಿಜವಾಗಿದೆ: ದೂರುದಾರ ಮಹಿಳೆ

Update: 2019-05-06 16:53 GMT

ಹೊಸದಿಲ್ಲಿ, ಮೇ 6: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ತನಿಖಾ ಸಮಿತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಮಹಿಳೆ, ಇದರಿಂದ ತನಗೆ ತೀವ್ರ ನಿರಾಶೆಯಾಗಿದೆ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, “ನಾನು ತುಂಬಾ ಭಯಭೀತಳಾಗಿದ್ದೇನೆ. ಎಲ್ಲಾ ಪುರಾವೆಗಳನ್ನು ವಿಚಾರಣೆ ಸಮಿತಿ ಮುಂದೆ ಸಲ್ಲಿಸಿದರೂ ನನಗೆ ನ್ಯಾಯವನ್ನಾಗಲಿ, ಭದ್ರತೆಯನ್ನಾಗಲಿ ಅದು ನೀಡಿಲ್ಲ” ಎಂದು ಹೇಳಿದ್ದಾರೆ. ‘‘ಇಂದು ನನ್ನ ಕೆಟ್ಟ ಭೀತಿ ನಿಜವಾಗಿದೆ. ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಹಾಗೂ ಪರಿಹಾರ ಸಿಗುತ್ತದೆ ಎಂಬ ನನ್ನ ಕನಸು ಛಿದ್ರವಾಗಿದೆ” ಎಂದು ಅವರು ತಿಳಿಸಿದ್ದಾರೆ.

“ಅಲ್ಲದೆ ನನಗೆ ವರದಿಯನ್ನು ಕೂಡ ನೀಡುವುದಿಲ್ಲ ಎಂದು ಸಮಿತಿ ಘೋಷಿಸಿದೆ. ಇದರಿಂದ ಲೈಂಗಿಕ ಕಿರುಕುಳ ಹಾಗೂ ಬಲಿಪಶು ಮಾಡಿರುವ ನನ್ನ ದೂರನ್ನು ತಿರಸ್ಕರಿಸಲು ಕಾರಣವಾದ ಅಂಶವನ್ನು ಗ್ರಹಿಸಲು ಕೂಡ ನನಗೆ ಯಾವುದೇ ದಾರಿ ಇಲ್ಲದಾಗಿದೆ’’ ಎಂದು ಮಹಿಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News