ಮೋದಿಯನ್ನು ದೇಶದ ಪ್ರಧಾನಿಯೆಂದು ನಾನು ಪರಿಗಣಿಸಿಲ್ಲ, ಆದ್ದರಿಂದ ‘ಫನಿ’ ಬಗ್ಗೆ ಚರ್ಚಿಸಿಲ್ಲ: ಮಮತಾ

Update: 2019-05-06 17:25 GMT

ಹೊಸದಿಲ್ಲಿ, ಮೇ 6: ಚಂಡಮಾರುತ ‘ಫನಿ’ ಬಗ್ಗೆ ಚರ್ಚಿಸಲು ಪಶ್ಚಿಮ ಬಂಗಾಳ ಸಿಎಂಗೆ ಕರೆ ಮಾಡಿದ್ದು, ಅವರು ಪ್ರತಿಕ್ರಿಯಿಸಿಲ್ಲ ಎನ್ನುವ ಪ್ರಧಾನಿ ಮೋದಿ ಆರೋಪಕ್ಕೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

ತಾನು ಮೋದಿಯನ್ನು ದೇಶದ ಪ್ರಧಾನಿ ಮಂತ್ರಿಯೆಂದು ಪರಿಗಣಿಸುವುದಿಲ್ಲ. ಆದ್ದರಿಂದ ಅವರೊಂದಿಗೆ ಚರ್ಚಿಸಿಲ್ಲ ಎಂದು ಮಮತಾ ಹೇಳಿದ್ದಾರೆ.

“ಅವರನ್ನು ದೇಶದ ಪ್ರಧಾನಿಯೆಂದು ನಾನು ಪರಿಗಣಿಸುವುದಿಲ್ಲ, ಹಾಗಾಗಿ ಅವರೊಂದಿಗೆ ಚರ್ಚಿಸಿಲ್ಲ. ಒಂದೇ ವೇದಿಕೆಯಲ್ಲಿ ಅವರೊಂದಿಗೆ ಗುರುತಿಸಿಕೊಳ್ಳಲು ಬಯಸುವುದಿಲ್ಲ. ನಾನು ಮುಂದಿನ ಪ್ರಧಾನಿಯ ಜೊತೆಗೆ ಮಾತನಾಡುತ್ತೇನೆ. ಚಂಡಮಾರುತದ ಹಾನಿಗೆ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ. ನಮಗೆ ಕೇಂದ್ರದ ನೆರವು ಬೇಕಿಲ್ಲ” ಎಂದು ಪಶ್ಚಿಮ ಬಂಗಾಳದಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಮಮತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News