ಬಡಗಕಜೆಕ್ಕಾರು ಆನಂದ ಪೂಜಾರಿ ನಿಧನ

Update: 2019-05-12 04:25 GMT

ಪುಂಜಾಲಕಟ್ಟೆ: ಪಾಂಡವರಕಲ್ಲು ಬ್ರಹ್ಮ ಬೈದರ್ಕಳ ಗರಡಿಯ ಗುರಿಕಾರರು, ಕಜೆಕ್ಕಾರು ಮಹಾದೇವ ದೇವೇಶ್ವರ ದೇವಸ್ಥಾನ,  ಮಡವು ಬಾಲಸುಬ್ರಹ್ಮಣ್ಯ ದೇವಸ್ಥಾನದ ದೈವಗಳ ಗುರಿಕಾರರಾಗಿ ಮತ್ತು ಸ್ಥಳೀಯ ಬಿಲ್ಲವ ಸಮಾಜದ 1ನೇ ಗುರಿಕಾರರಾದ ಮಾಜಿ  ಪೋಸ್ಟ್ ಮಾಸ್ಟರ್ ಪೆರಂಪಾಡಿಗುತ್ತು ಆನಂದ ಪೂಜಾರಿ (80) ಅವರು ಶನಿವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.

ಅವರು ಸ್ಥಳೀಯ ಮಾಡ ಸ.ಹಿ.ಪ್ರಾ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಬಿಲ್ಲವ ಸಂಘದ ಗೌರವ ಸಲಹೆಗಾರರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಇವರು ಪತ್ನಿ, ಪುತ್ರ, ಪುತ್ರಿಯರನ್ನು  ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News