ಉಚ್ಚಿಲ: ಬಾವಿಗೆ ಬಿದ್ದು ಯುವಕ ಮೃತ್ಯು
Update: 2019-05-16 07:31 GMT
ಕಾಪು, ಮೇ 16: ಬಾವಿಯ ಕೆಲಸ ಮಾಡುತ್ತಿದ್ದ ಯುವಕನೋರ್ವ ಅಕಸ್ಮಿಕವಾಗಿ ಬಾವಿಯೊಳಗೆ ಬಿದ್ದು ಮೃತಪಟ್ಟ ಘಟನೆ ಉಚ್ಚಿಲ ಸಮೀಪದ ಭಾಸ್ಕರ ನಗರ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಉಚ್ಚಿಲ- ಪಣಿಯೂರು ರಸ್ತೆಯ ಮುಳ್ಳಗುಡ್ಡೆ ನಿವಾಸಿ ಹಸೈನಾರ್ ಎಂಬವರ ಪುತ್ರ ನಾಸಿರ್ (24) ಎಂದು ಗುರುತಿಸಲಾಗಿದೆ.
ಇವರು ಬಾವಿ ಸೇರಿದಂತೆ ಕೂಲಿ ಕೆಲಸ ಮಾಡುತ್ತಿದ್ದು, ಇತರರೊಂದಿಗೆ ಭಾಸ್ಕರ ನಗರದಲ್ಲಿ ಬಾವಿ ಕೆಲಸ ಮಾಡಿ ಮೇಲೆ ಹತ್ತಿಕೊಂಡು ಬರುವಾಗ ಅಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದು ಗಂಭೀರವಾಗಿ ಗಾಯಗೊಂಡರೆನ್ನಲಾಗಿದೆ.
ಕೂಡಲೇ ಇವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ದಾರಿ ಮಧ್ಯೆ ನಾಸಿರ್ ಮೃತಪಟ್ಟರೆಂದು ತಿಳಿದುಬಂದಿದೆ.