ಈಶ್ವರಚಂದ್ರ ವಿದ್ಯಾಸಾಗರರ ಬೃಹತ್ ಪ್ರತಿಮೆ ನಿರ್ಮಿಸುತ್ತೇವೆ: ಪ್ರಧಾನಿ ಮೋದಿ
Update: 2019-05-16 10:36 GMT
ಹೊಸದಿಲ್ಲಿ, ಮೇ 16: ಧ್ವಂಸಗೊಂಡ ಸ್ಥಳದಲ್ಲೇ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಬೃಹತ್ ಪ್ರತಿಮೆಯೊಂದನ್ನು ಕೇಂದ್ರ ಸರಕಾರ ನಿರ್ಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಾನು ಕೊಲ್ಕತ್ತಾದಲ್ಲಿ ಚುನಾವಣಾ ರ್ಯಾಲಿಗೆ ತೆರಳುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ತನ್ನ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಅವಕಾಶ ನೀಡುತ್ತಾರೋ ಎನ್ನುವುದು ಗೊತ್ತಿಲ್ಲ ಎಂದರು.
“ಅಮಿತ್ ಶಾ ಅವರ ರೋಡ್ ಶೋ ವೇಳೆ ಟಿಎಂಸಿ ಗೂಂಡಾಗಳು ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೈದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದವರು ಹೇಳಿದರು.