ಬಂಟ್ವಾಳ: ಆತ್ಮಹತ್ಯೆಗೆ ಮುಂದಾದ ಯುವಕನನ್ನು ರಕ್ಷಿಸಿದ ತಂಡ

Update: 2019-05-16 11:57 GMT

ಬಂಟ್ವಾಳ, ಮೇ 16: ಕುಟುಂಬ ಸಮಸ್ಯೆಗೆ ಸಂಬಂಧಿಸಿದಂತೆ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನೋರ್ವನನ್ನು ಇಲ್ಲಿನ ಯುವಕರು ತಡೆದು ಆತನ ಮನವೊಲಿಸಿ ಮನೆಗೆ ತಲುಪಿಸಿದ ಸೌಹಾರ್ದ ಘಟನೆ ನಡೆದಿದೆ.

ತಾಲೂಕಿನ ಸೂರಿಕುಮೇರು ನಿವಾಸಿ ಪ್ರಕಾಶ್ ಎಂಬ ಯುವಕ ಮಧ್ಯರಾತ್ರಿ ಸುಮಾರು 1 ಗಂಟೆಯ ವೇಳೆಗೆ ಪಾಣೆಮಂಗಳೂರು ನೂತನ ನೇತ್ರಾವತಿ ಸೇತುವೆಯ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ ಪಾಣೆಮಂಗಳೂರು ನಿವಾಸಿ ಇಲ್ಯಾಸ್ ಹಾಗೂ ಅವರ ಸ್ನೇಹಿತರು ಆತನನ್ನು ತಡೆದು ವಿಚಾರಣೆ ನಡೆಸಿದ್ದಾರೆ.

ಈ ಸಂದರ್ಭ ಯುವಕ ತನ್ನ ಕುಟುಂಬದ ಸಮಸ್ಯೆಯನ್ನು ವಿವರಿಸಿ, ನದಿಗೆ ಹಾರಿ ಆತ್ಮಹತ್ಯೆಗೈಯಲು ಬಂದಿರುವುದಾಗಿ ತಿಳಿಸಿದ್ದಾನೆ. ಈತನ ಸಮಸ್ಯೆಯನ್ನು ಆಲಿಸಿದ ಇಲ್ಲಿನ ಯುವಕರು ಆತನಿಗೆ ಧೈರ್ಯ ತುಂಬಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರಲ್ಲದೆ ಬಳಿಕ ಪೊಲೀಸರನ್ನು ಸಂಪರ್ಕಿಸಿ ಆತನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News