ಕಾಂಗ್ರೆಸ್‌ಗೆ ಪ್ರಧಾನಿ ಹುದ್ದೆ ದೊರೆಯದಿದ್ದರೆ ಸಮಸ್ಯೆಯೇನಿಲ್ಲ :ಗುಲಾಂ ನಬಿ ಆಝಾದ್

Update: 2019-05-16 14:20 GMT

ಪಾಟ್ನಾ,ಮೇ 16: ಲೋಕಸಭಾ ಚುನಾವಣೆಗಳ ಬಳಿಕ ಕಾಂಗ್ರೆಸ್‌ಗೆ ಪ್ರಧಾನಿ ಹುದ್ದೆ ದೊರೆಯದಿದ್ದರೆ ಪಕ್ಷಕ್ಕೇನೂ ಸಮಸ್ಯೆಯಿಲ್ಲ ಎಂದು ಹಿರಿಯ ನಾಯಕ ಗುಲಾಂ ನಬಿ ಆಝಾದ್ ಅವರು ಗುರುವಾರ ಇಲ್ಲಿ ಹೇಳಿದರು. ಬಿಜೆಪಿಯು ಕೇಂದ್ರದಲ್ಲಿ ಸರಕಾರವನ್ನು ರಚಿಸುವುದನ್ನು ತಡೆಯುವುದು ಪ್ರತಿಪಕ್ಷದ ಆದ್ಯತೆಯಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರಂಭದಿಂದಲೂ ನಮ್ಮ ಆದ್ಯತೆ ಅತ್ಯಂತ ಸ್ಪಷ್ಟವಾಗಿದೆ. ಕಾಂಗ್ರೆಸ್ ಪರವಾಗಿ ಒಮ್ಮತ ಮೂಡಿದರೆ ಪಕ್ಷವು ನಾಯಕತ್ವವನ್ನು ವಹಿಸಲಿದೆ. ಆದರೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ, ಸರ್ವಾನುಮತದ ನಿರ್ಧಾರವನ್ನು ನಾವು ಪಾಲಿಸುತ್ತೇವೆ. ಈ ಸಮಯದಲ್ಲಿ ಪ್ರಧಾನಿ ಹುದ್ದೆಯ ಕುರಿತು ಯಾವುದೇ ಗೊಂದಲವನ್ನು ಸೃಷ್ಟಿಸಲು ನಾವು ಬಯಸುವುದಿಲ್ಲ" ಎಂದರು.

ಎನ್‌ಡಿಎ ಸರಕಾರ ರಚಿಸುವುದಿಲ್ಲ ಮತ್ತು ನರೇಂದ್ರ ಮೋದಿ ಮತ್ತೆ ಪ್ರಧಾನಿಯೂ ಆಗುವುದಿಲ್ಲ ಎಂದು ಹೇಳಿದ ಆಝಾದ್,ಲೋಕಸಭಾ ಚುನಾವಣೆಗಳ ನಂತರ ಕೇಂದ್ರದಲ್ಲಿ ಎನ್‌ಡಿಎಯೇತರ,ಬಿಜೆಪಿಯೇತರ ಸರಕಾರವು ಸ್ಥಾಪನೆಯಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News