ವಡೆ ಸಾಂಬಾರ್‌ನಲ್ಲಿ ಸತ್ತ ಹಲ್ಲಿ ಪತ್ತೆ!

Update: 2019-05-16 17:37 GMT
ಸಾಂದರ್ಭಿಕ ಚಿತ್ರ

ನಾಗಪುರ, ಮೇ 16: ನಾಗಪುರದಲ್ಲಿರುವ ಹಾಲ್ದಿರಾಮ್ ಹೊಟೇಲ್‌ನಲ್ಲಿ ನೀಡಲಾದ ವಡೆ ಸಾಂಬಾರ್‌ನಲ್ಲಿ ಸತ್ತ ಹಲ್ಲಿ ಇದ್ದುದಾಗಿ ವಕ್ತಿಯೋರ್ವ ಆರೋಪಿಸಿದ್ದಾನೆ ಎಂದು ಆಹಾರ ಹಾಗೂ ಔಷಧ ಆಡಳಿತಾಧಿಕಾರಿ (ಎಫ್‌ಡಿಎ) ತಿಳಿಸಿದ್ದಾರೆ.

ಅಜನಿ ಸ್ಕ್ವಾರ್‌ನಲ್ಲಿರುವ ಹೊಟೇಲ್‌ನಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ವಡೆ ಸಾಂಬಾರ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ವಾರ್ಧಾದ ಇಬ್ಬರು ಹೊಟೇಲ್‌ನಲ್ಲಿ ವಡೆ ಸಾಂಬಾರ್‌ಗೆ ಆರ್ಡರ್ ಮಾಡಿದ್ದರು. ಆದರೆ, ಓರ್ವನಿಗೆ ವಡೆ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಯಿತು. ಅವರು ಈ ವಿಚಾರವನ್ನು ಮಳಿಗೆಯ ಮೇಲ್ವಿಚಾರಕರ ಗಮನಕ್ಕೆ ತಂದರು ಎಂದು ಎಫ್‌ಡಿಎ (ನಾಗರಪುರ) ಮಿಲಿಂದ್ ದೇಶಪಾಂಡೆ ಹೇಳಿದ್ದಾರೆ.

ಅನಂತರ ಅವರಿಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಬುಧವಾರ ಬಿಡುಗಡೆಗೊಳಿಸಲಾಯಿತು. ಆದರೆ, ಈ ಇಬ್ಬರೂ ಮಾಧ್ಯಮದವರಿಗೆ ವಿಷಯ ತಿಳಿಸಿಲ್ಲ ಅಥವಾ ಪೊಲೀಸರಿಗೆ ದೂರು ನೀಡಿಲ್ಲ ಎಂದು ದೇಶಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News