ಪ್ರಗತಿಪರ ಕೃಷಿಕ ರಮಾನಾಥ್ ರಾವ್ ನಿಧನ

Update: 2019-05-17 11:39 GMT

ಪುತ್ತೂರು; ತಾಲೂಕಿನ ಪ್ರಗತಿಪರ ಕೃಷಿಕರಾಗಿದ್ದ ಸೆಂಟ್ಯಾರ್ ಬಳಿಯ ಮರಿಕೆ ಎ.ಪಿ.ರಮಾನಾಥ್ ರಾವ್ (82) ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ಸಾಮಾಜಿಕ ಮುಂದಾಳಾಗಿ ಗುರುತಿಸಿಕೊಂಡಿದ್ದ ಇವರು ಮರಿಕೆ ಮನೆತನದ ದಿ.ಎ.ಪಿ. ಸುಬ್ಬಯ್ಯ ರಾವ್ ಅವರ ಪುತ್ರ. ವಿಶೇಷವಾಗಿ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಇವರು ಏಳ್ಮುಡಿ ಹಾಲು ಉತ್ಪಾದಕರ ಸಂಘ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಕಾರ್ಪಾಡಿ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಸೆಂಟ್ಯಾರ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ,ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸಹಿತ ಹಲವು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ್ದ ಇವರು ಪತ್ನಿ ಶಾಂತಾ , ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News