ಶಬರಿಮಲೆ ಯಾತ್ರೆ ವೇಳೆ ಹೃದಯಾಘಾತ: ಪುತ್ತೂರಿನ ವ್ಯಕ್ತಿ ಸಾವು

Update: 2019-05-17 12:17 GMT

ಪುತ್ತೂರು: ಶಬರಿಮಲೆ ಯಾತ್ರೆಯ ವೇಳೆಯಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಪಂಪೆಯಲ್ಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಆನಾಜೆ ನಿವಾಸಿ ದಿ. ಸೋಮಶೇಖರ ಗೌಡ ಎಂಬವರ ಪುತ್ರ ಜನಾರ್ದನ ಗೌಡ (38) ಮೃತಪಟ್ಟವರು.

ಜನಾರ್ದನ ಗೌಡ ಅವರು ತನ್ನ ಪುತ್ರಿ ದೀಕ್ಷಾ ಮತ್ತು ಇತರರೊಂದಿಗೆ ಮೇ15ರಂದು ಪುತ್ತೂರಿನಿಂದ ಇರುಮುಡಿ ಕಟ್ಟಿಕೊಂಡು ರೈಲಿನಲ್ಲಿ ಶಬರಿಮಲೆಗೆ ತೆರಳಿದ್ದರು. ಗುರುವಾರ ಪಂಪೆಗೆ ತಲುಪಿದ್ದು ಅಲ್ಲಿನ ನದಿಯಲ್ಲಿ ಸ್ನಾನ ಮುಗಿಸಿ ಮುಂದುವರಿಯುತ್ತಿದ್ದ ವೇಳೆಯಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಪಕ್ಕದ ಆಸ್ಪತ್ರೆಗೆ ಕರೆತರಲಾಗಿದ್ದು, ಈ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದರು. ಬಳಿಕ ಕೇರಳದ ಕೊಟ್ಟಾಯಂ ಸಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. 

ವಿವಾಹ ವಾರ್ಷಿಕೋತ್ಸವದಂದೇ ಸಾವು

ಕಳೆದ 8 ವರ್ಷಗಳ ಹಿಂದೆ ಜನಾರ್ಧನ ಅವರ ವಿವಾಹವು ಲಲಿತಾ ಅವರೊಂದಿಗೆ ಮೇ 16ರಂದು ನಡೆದಿತ್ತು. ವಿವಾಹದ 9ನೇ ವಾರ್ಷಿಕೋತ್ಸವ ದಿನದಂದೇ ಜನಾರ್ಧನ ಅವರು ಮೃತಪಟ್ಟಿದ್ದಾರೆ. 

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News