ತೇಜ್ ಪ್ರತಾಪ್ ಯಾದವ್ ರ ಅಂಗರಕ್ಷಕರಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

Update: 2019-05-19 16:24 GMT
ಫೋಟೊ ಕೃಪೆ: ANI

ಪಾಟ್ನಾ,ಮೇ 19: ಆರ್‌ಜೆಡಿ ಅಧ್ಯಕ್ಷ ಲಾಲುಪ್ರಸಾದ್ ಯಾದವ್ ಅವರ ಪುತ್ರ ತೇಜಪ್ರತಾಪ್ ಯಾದವ್ ಅವರ ಖಾಸಗಿ ಅಂಗರಕ್ಷಕರು ಕ್ಯಾಮೆರಾಮನ್ ಓರ್ವನನ್ನು ಥಳಿಸಿದ ಘಟನೆ ರವಿವಾರ ಇಲ್ಲಿಯ ಮತಗಟ್ಟೆಯೊಂದರ ಬಳಿ ನಡೆದಿದೆ.

ಘಟನೆಯು ತನ್ನ ಕೊಲೆಗೆ ನಡೆಸಿದ ಪಿತೂರಿ ಎಂದು ತೇಜ್ ಪ್ರತಾಪ್ ಆರೋಪಿಸಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತನ್ನ ಅಂಗರಕ್ಷಕ ಯಾರನ್ನೂ ಥಳಿಸಿಲ್ಲ,ಆದರೆ ಆತನ ಕೈಗೇ ಗಾಯವಾಗಿದೆ. ತಾನು ಮತಗಟ್ಟೆಯಿಂದ ಮರಳುತ್ತಿದ್ದಾಗ ಕೆಲವು ಸುದ್ದಿಗಾರರು ತನ್ನ ಕಾರನ್ನು ಸುತ್ತುವರಿದಿದ್ದರು.ಓರ್ವ ಕ್ಯಾಮೆರಾಮನ್ ಕಾರಿನ ಗಾಜನ್ನು ಒಡೆದಿದ್ದ. ಈ ಬಗ್ಗೆ ತಾನು ಎಫ್‌ಐಆರ್ ದಾಖಲಿಸಿದ್ದೇನೆ. ಹಿಂದೆಯೂ ತನಗೆ ಬೆದರಿಕೆಗಳು ಬಂದಿದ್ದವು. ತನ್ನ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ತನ್ನ ಹತ್ಯೆಗೆ ಪಿತೂರಿ ನಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News