ಪ್ರವಾದಿ ಮುಹಮ್ಮದರನ್ನು ನಿಂದಿಸಿದ ವ್ಯಕ್ತಿಯಿಂದ ಖಾಝಿ ತ್ವಾಕಾ ಉಸ್ತಾದರಲ್ಲಿ ಕ್ಷಮೆಯಾಚನೆ
Update: 2019-05-20 06:43 GMT
ಮಂಗಳೂರು: ಇತ್ತೀಚಿಗೆ ಇಸ್ಲಾಮ್ ಹಾಗೂ ಪ್ರವಾದಿ ಮುಹಮ್ಮದ್ (ಸ) ಅವರನ್ನು ನಿಂದಿಸಿ, ಅವಹೇಳನಕಾರಿ ಹೇಳಿಕೆ ನೀಡಿದ್ದ ಎನ್ನಲಾದ ವ್ಯಕ್ತಿ ಮಂಗಳೂರು ಖಾಝಿ ತ್ವಾಕಾ ಉಸ್ತಾದ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
ಪ್ರವಾದಿಯನ್ನು ನಿಂದಿಸಿದ ವ್ಯಕ್ತಿಯನ್ನು ಮಂಜೇಶ್ವರ ನಿವಾಸಿ, ಬಂದರ್ ಅಡಿಕೆ ಅಂಗಡಿಯಲ್ಲಿರುವ ಮಂಜುನಾಥ್ ನಾಯಕ್ ಎಂದು ತಿಳಿದುಬಂದಿದೆ.
ಮಂಜುನಾಥ್ ಕೆಲವು ತಿಂಗಳ ಹಿಂದೆ ಪ್ರವಾದಿಯನ್ನು ನಿಂದನೆ ಮಾಡಿದ್ದು, ಇದೀಗ ಪಶ್ಚಾತಾಪಪಟ್ಟು ಖಾಝಿಯವರ ಮನೆಗೆ ತೆರಳಿ ಕ್ಷಮೆಯಾಚನೆ ಮಾಡಿದ್ದಾರೆ.
ಈ ಬಗ್ಗೆ ಖಾಝಿ ಅವರು ಮಾತನಾಡಿ, ಮಂಜುನಾಥ ನಾಯಕ್ ಮೇಲೆ ಯಾರೂ ಈ ವಿಚಾರದಲ್ಲಿ ಮನಸ್ತಾಪ ಹೊಂದಬಾರದೆಂದು ಮನವಿ ಮಾಡಿದ್ದಾರೆ.